ಬುಧವಾರ, ನವೆಂಬರ್ 4, 2009

ಸಾಮೂಹಿಕ ಅತ್ಯಾಚಾರ

ಇತ್ತೀಚಿಗೆ ಖಾಸಗಿ ಟಿವಿ ವಾಹಿನಿಯಲ್ಲಿ ರಾಜ್ಯ ರಾಜಕೀಯದ ಸ್ಥಿತ್ಯಂತರ ಕುರಿತು ಚರ್ಚೆ ನಡೆಯುತ್ತಿತ್ತು. ಕಾಂಗ್ರೆಸ್ ಪಕ್ಷದ ನಾಯಕ,ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಉಗ್ರಪ್ಪನವರು ಭಾಗವಹಿಸಿದ್ದರು.ವಾಹಿನಿಯು ಇಬ್ಬರು ನಿರೂಪಕರ (ಒಬ್ಬರು ಎಕ್ಸ್ಪರ್ಟ್ ಅಂತೆ) ಜತೆ ಅದೇ ಮನೋಸ್ಥಿತಿಯ ಇನ್ನೋರ್ವ ಘಟಾನುಘಟಿ  ಪತ್ರಕರ್ತ ಮಹಾಶಯರೂ ಇದ್ದರು.ಈ ಘಟಾನುಘಟಿ ಪತ್ರಕರ್ತರಿಗೆ ಉತ್ತರಿಸಲು ಸಿಗುತ್ತಿದ್ದಷ್ಟು ಕಾಲಾವಕಾಶ ಉಗ್ರಪ್ಪನವರಿಗೆ ಸಿಗುತ್ತಿರಲಿಲ್ಲ. ಉಗ್ರಪ್ಪನವರು ಪೂರ್ತಿಯಾಗಿ ಉತ್ತರಿಸಲೂ ಓರ್ವ ನಿರೂಪಕ ಅವಕಾಶ ನೀಡುತ್ತಿರಲಿಲ್ಲ.ಅಷ್ಟೇ ಅಲ್ಲ.ಮೂವರೂ ಸೇರಿಕೊಂಡು ಉಗ್ರಪ್ಪನವರ ಮೇಲೆ ದಾಳಿ ನಡೆಸುತ್ತ ಖುಷಿ ಅನುಭವಿಸುತ್ತಿದ್ದರು. ಇದು ಎಷ್ಟು ವಿಪರೀತವಾಯಿತೆಂದರೆ ಉಗ್ರಪ್ಪನವರ ಸಹನೆಯ ಕಟ್ಟೆ ಒಡೆದು ,"ನನಗೆ ಮಾತನಾಡಲು ಅವಕಾಶ ಕೊಡಿ,ಇಲ್ಲವಾದರೆ ಎದ್ದು ಹೋಗುತ್ತೇನೆ"ಎಂದು ಎಚ್ಚರಿಸಿದರು.ಆಗ ಈ ಮಹಾಮಹಿಮರೆಲ್ಲ  ಆ ಕ್ಷಣಕ್ಕಾದರೂ ಸುಮ್ಮನಾಗಿ ಉತ್ತರಿಸಲು ಅವಕಾಶ ನೀಡಲೆಬೆಕಾಯಿತು. ಒಂದೊಂದು ಸಲವಂತೂ ರಾಜಕೀಯದ ಗಂಧವೇ ಅರಿಯದ ಪತ್ರಕರ್ತ ಮಹಾಶಯರು ಉಗ್ರಪ್ಪನವರ ಎದುರು ನಗೆಪಾಟಲಿಗೆ ಈಡಾಗಬೇಕಾಯಿತು. ಆಡಳಿತ ಯಂತ್ರವೇ ಬಿದ್ದು ಹೋಗಿದೆ ಎಂಬ ಉಗ್ರಪ್ಪನವರ ಆರೋಪಕ್ಕೆ ಪತ್ರಕರ್ತ ಮಹಾಶಯರು," ಅಧಿಕಾರಿಗಳಿರುವಾಗ ಆಡಳಿತ ಯಂತ್ರ ಬಿದ್ದು ಹೋಗುವುದಿಲ್ಲ,ಯಾರೇ ಇದ್ದರೂ ಇಲ್ಲದಿದ್ದರೂ ಸರ್ಕಾರ ನಡೆಯುತ್ತದೆ ಎಂಬ ಮಹಾನ್ ಬುದ್ಧಿವನ್ತಿಕೆಯ ಉತ್ತರ ಕೊಟ್ಟರು. ಇದಕ್ಕೆ ನಕ್ಕ ಉಗ್ರಪ್ಪ , ಸರ್ಕಾರ ಕೇವಲ ಅಧಿಕಾರಿಗಳಿಂದ ನಡೆಯುವುದಿಲ್ಲ,ಸರ್ಕಾರದ ಕಾರ್ಯಕ್ರಮ ಜಾರಿಗೆ ನಾಯಕನೊಬ್ಬನ ಪ್ರೇರಣೆ ಬೇಕಾಗುತ್ತದೆ,ಅದಕ್ಕೆ ಜತೆಗಾರರ ಬೆಂಬಲವೂ ಇರಬೇಕಾಗುತ್ತದೆ,ಕೇವಲ ಅಧಿಕಾರಿಗಳೇ ನಡೆಸುವುದು ಕಚೇರಿಯಾಗುತ್ತದೆಯೇ  ಹೊರತು ಸರ್ಕಾರವಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.ಪತ್ರಕರ್ತ ಮಹಾಶಯರು ಬಾಯಿ ಮುಚ್ಚಿ ಕೂತರು. ಆನಂತರವೂ ಮೂವರೂ ಮಹಾನುಭಾವರ ದಾಳಿ ಮುಂದುವರಿಯಿತು.ಉಗ್ರಪ್ಪನವರು ಏಕಾಂಗಿ ವೀರರಾಗಿ ಹೋರಾಟ ಮುಂದುವರಿಸಿದರು. ಈ ಕಾರ್ಯಕ್ರಮವನ್ನು ನೋಡಿದ ನಿರಂತರವಾಗಿ ರಾಜಕೀಯ ವರದಿ ಮಾಡುವ ಪತ್ರಕರ್ತರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ," ಮೂವರು ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಯತ್ನಕ್ಕೆ ಉಗ್ರಪ್ಪ ಮುಟ್ಟಿ ನೋಡಿಕೊಳ್ಳುವಂತ ಪೆಟ್ಟು ಕೊಟ್ಟರು"     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?