ಸೋಮವಾರ, ನವೆಂಬರ್ 2, 2009

ಬಿಜೆಪಿ ಭಿನ್ನಮತಕ್ಕೆ ಹೈದರಾಬಾದ್ ಕನೆಕ್ಷನ್

ರಾಜಕೀಯದ ಲೆಕ್ಕಾಚಾರಗಳೇ ಹಾಗೆ.ನೆರೆಯ ಆಂಧ್ರವನ್ನೇ ನೋಡಿ.ಸಂಖ್ಯಾಬಲದಲ್ಲಿ ಅತಿ ಸಣ್ಣ ವೈಶ್ಯ ಸಮುದಾಯಕ್ಕೆ ಸೇರಿದ ರೋಸಯ್ಯ ಮುಖ್ಯಮಂತ್ರಿ ಆದಂದಿನಿಂದ ಬಹುಸಂಖ್ಯಾತ ಪ್ರಬಲ ಜಾತಿಯ ರೆಡ್ಡಿಗಳು ಅಸಹನೆಯಿಂದ ಕಾಲೆಳಿಯುವ ಕೆಲಸದಲ್ಲಿ ನಿರತರಾಗಿದ್ದಾರೆ.ಅದಕ್ಕಾಗಿ ದಿವಂಗತ ಮುಖ್ಯಮಂತ್ರಿ ರಾಜಶೇಖರರೆಡ್ಡಿ ಪುತ್ರ ಜಗನ್ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅಲ್ಪ ಸಂಖ್ಯಾತ ರೆಡ್ಡಿ ಸಹೋದರರು ಬಹುಸಂಖ್ಯಾತ,ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಯೆಡಿಯುರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಹೋರಾಡುತ್ತಿದ್ದಾರೆ. ವಿಚಿತ್ರ ಅಂದರೆ ಗಣಿ ವ್ಯವಹಾರವನ್ನು ಆಂಧ್ರದಲ್ಲೂ  ನಡೆಸುತ್ತಿರುವ ಜನಾರ್ದನ ರೆಡ್ಡಿ ಮಾಡಿದ ಅಕ್ರಮ ವ್ಯವಹಾರಗಳ ಕಾರಣ ಆಂಧ್ರ ಸರ್ಕಾರ ನೋಟೀಸ್ ಜಾರಿಗೊಳಿಸಿದೆ.
ಇದಕ್ಕೆ ಕಾರಣವಾದರೂ ಏನು? ಇತ್ತೀಚಿಗೆ ಕರ್ನಾಟಕಕ್ಕೆ ಬಂದಿದ್ದ ರೋಸಯ್ಯ ಅವರಿಗೆ ಯಡಿಯೂರಪ್ಪ ಈ ಐಡಿಯಾ ಕೊಟ್ಟಿರಬಹುದೆಂದು ರೆಡ್ಡಿ ಬಳಗ ಅನುಮಾನಿಸುತ್ತಿದೆಯಂತೆ.ಆದರೆ ರಾಜಕೀಯ ಪಂಡಿತರೊಬ್ಬರ ಪ್ರಕಾರ,ಈ ರಾಜಕೀಯ ಬಿಕ್ಕಟ್ಟಿನ ಮೂಲ ರೆಡ್ಡಿಗಳ ವ್ಯಾಪಾರಿ ಲೆಕ್ಕಾಚಾರದಲ್ಲಿ ಅಡಗಿದೆ.ರಾಜಶೇಖರ ರೆಡ್ಡಿ ಬದುಕಿರುವವರೆಗೆ ಆಂಧ್ರದಲ್ಲಿ ಸುಗಮವಾಗಿ ಗಣಿ ವ್ಯವಹಾರ ನಡೆಸುತ್ತಿದ್ದ ರೆಡ್ಡಿ ಸಹೋದರರಿಗೆ ರೋಸಯ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ.ಕರ್ನಾಟಕದಲ್ಲೂ ಯಡಿಯೂರಪ್ಪನವರು ಕಿರಿಕಿರಿ ಶುರು ಮಾಡಿದ್ದಾರೆ. ಹೀಗಾಗಿ ಎರಡೂ ಕಡೆ ಭೂಮಿಗೆ ಕನ್ನ ಹಾಕುವ ಕಳ್ಳ ಕಾಯಕವನ್ನು ಮುಂದುವರಿಸುವ ಸಲುವಾಗಿ ರೆಡ್ಡಿ ಸಹೋದರರಿಗೆ ಎರಡೂ ರಾಜ್ಯಗಳಲ್ಲಿ ತಮಗೆ ಅನುಕೂಲಕರವಾಗಿರುವ ಸರ್ಕಾರ ಬೇಕು.ಹೀಗಾಗಿ ಅವರು ಕಾಂಗ್ರೆಸ್ ಪಕ್ಷದ ಜತೆ ಚೌಕಾಸಿ ವ್ಯಾಪಾರ ಶುರು ಮಾಡಿದ್ದಾರೆ.ಆಂಧ್ರದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರಬೇಕು,ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಪತನವಾಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕ್ಕೆ ಬರಬೇಕು.ಇದು ರೆಡ್ಡಿ ಸಹೋದದರರು ಕಾಂಗ್ರೆಸ್ ವರಿಷ್ಟರ ತಲೆಗೆ ತುಂಬಿರುವ ವಿಚಾರ.

ರೆಡ್ಡಿ ಸಹೋದರರ ಈ ಲೆಕ್ಕಾಚಾರ ಈಗಲೇ ಈಡೇರುವುದು ಸಾಧ್ಯವಿಲ್ಲದಿರಬಹುದು.ಅಡಿಪಾಯವಂತೂ ಹಾಕಿದ್ದಾರೆ.ಈಗ ಬಿಜೆಪಿ ವರಿಷ್ಟರು ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಹೇಳಿರುವಾಗ ರೆಡ್ಡಿ ಸಹೋದರರು ಏನು ಮಾಡುತ್ತಾರೆ? ತಮ್ಮ ಲೆಕ್ಕಾಚಾರದಂತೆ ಸರ್ಕಾರದ ಪತನಕ್ಕೆ ಕಾರ್ಯ ತಂತ್ರ ರೂಪಿಸುತ್ತಾರೆ ಅಥವಾ ಸಕಾಲಕ್ಕೆ ಕಾಯುತ್ತಾರೆ.ಈಗ  ವರಿಷ್ಟರ ಮಾತಿನಿಂದ ಬೆಚ್ಚಿ ಬಿದ್ದಿರುವ ಸಾಕಷ್ಟು ಅವಕಾಶವಾದಿ ಶಾಸಕರಂತೂ ಮತ್ತೆ ಯೆಡಿಯೂರಪ್ಪ ಮುಂದೆ ಹಲ್ಲು ಕಿರಿಯಲು ಆರಂಭಿಸುತ್ತಾರೆ.ಇಂಥ ಸಂದರ್ಭದಲ್ಲಿ ಸಂಖ್ಯಾಬಲವಿಲ್ಲದ ರೆಡ್ಡಿಗಳು ಹೊಸ ಹೂಟ ಹೂಡ ಲೆಬೇಕಾಗುತ್ತದೆ.           

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?