ಶುಕ್ರವಾರ, ನವೆಂಬರ್ 13, 2009

ಒಂದು ಅಣಕ- ಯಡಿಯೂರಿ ಪತ್ರಿಕಾ ಗೋಷ್ಠಿ

(ರೆಡ್ಡಿ ಬ್ಲಾಸ್ಟ್ ಕ್ಲಬ್ಬಿನಲ್ಲಿ  ಕರುನಾಡ ಮುಖ್ಯಮಂತ್ರಿ ಯಡಿಯೂರಿ ಚಿಂತಾಕ್ರಾಂತರಾಗಿ ಕುಳಿತಿದ್ದರು.ಪತ್ರಕರ್ತರು ಪ್ರಸಾದ
 ಮೇಯ್ದು ಘರ್ಜಿಸಲು ಸಿದ್ಧರಾಗಿದ್ದರು)

 ಗ್ರಾಮ ಸಿಂಹ ಪತ್ರಿಕೆಯ ವರದಿಗಾರ: ನಮಸ್ಕಾರ ಸಾರ್ .ನಿಮಗೆ ರಾಜ್ಯೋತ್ಸವದ ಶುಭಾಶಯಗಳು.

ಯಡಿಯೂರಿ: ರಾಜ್ಯೋತ್ಸವ ಎಲ್ಲಿ ಬಂತ್ರೀ.ರಾಜ್ಯಾನೇ ಅಲ್ಲಾಡ್ತಿರುವಾಗ ಶುಭಾಷಯ ಬೇರೆ ಕೇಡು.
ಗಂಡುಗಲಿ: ಯಾಕೆ ಯಡಿಯೂರಪ್ಪನವರೇ ?ಸಿಟ್ಟು  ಮಾಡ್ಕೋಬೇಡಿ. ತೆಲುಗಿನವರಿಗೆ ನಾನು ಹೆದರೋದಿಲ್ಲ,ಅವರ್ಯಾರನ್ನೂ ಕೇರ್ ಮಾಡೋದಿಲ್ಲ ಅಂತ ಹೇಳಿದರಂತೆ.

ಯಡಿಯೂರಿ: ನಾನೆಲ್ರೀ ಹಾಗೆ ಹೇಳಿದ್ದೀನಿ?ಇದೆಲ್ಲಾ ಮಾಧ್ಯಮಗಳ ಸೃಷ್ಟಿ.

ಘರ್ಜನೆ: ಸ್ವಾಮಿ, ಇಪ್ಪತ್ನಾಲ್ಕು ಗಂಟೆ ಚಾನಲ್ನಲ್ಲಿ ನಿಮ್ಮ ಮಾತೇ ಘಂಟೆ ಹೊಡೆದಾಗೆ ಬಂದಿದೆ, ಹೇಳ್ಲಿಲ್ಲ ಅಂದ್ರೆ ಹೆಂಗ್ ಬುದ್ಧೀ?

ಯಡಿಯೂರಿ: ನಾನು ತೆಲುಗಿನವರ ವಿಚಾರ ಮಾತಾಡಲಿಲ್ಲ ಅಂತ ಹೇಳಲಿಲ್ಲ.ನಾನು ಹೇಳಿದ್ದೇ ಬೇರೆ ,ನೀವು ಬರೆದಿದ್ದೇ ಬೇರೆ.ನನಗೆ ತೆಲುಗಿನವರನ್ನು ಕಂಡ್ರೆ ಆಗಲ್ಲ ಅಂತ ಯಾರ್ರೀ ಹೇಳಿದ್ದು? (ಗುಟ್ಟು ಹೇಳುವ ರೀತಿಯಲ್ಲಿ ಬಾಯಿಗೆ ಕೈ ಅಡ್ಡ ಇಟ್ಟುಕೊಂಡು "ನಾನು ಆಂಧ್ರ ಸೀಯೇಮ್ ಎಷ್ಟು ಕ್ಲೋಸ್ ಅಂತ ನಿಮಗೇ ಗೊತ್ತು.ಅವರು ಬೆಂಗಳೂರಿಗೆ ಬಂದು ಹೋದ ಮೇಲೆ ಏನಾಗ್ತಿದೆ ಅಂತ ನೀವೇ ನೋಡ್ತಾ ಇದೀರಲ್ಲಾ.ಆ ಬಳ್ಳಾರೀ ಬಡ್ಡೀ ಮಕ್ಳೀಗೆ ಯಂಗೆ ಗುಮ್ತಿದಾರೆ ನೋಡಿದ್ರಾ? ಇನ್ನು ನನ್ನ ತಂಟೆಗೆ ಬರೋಕೆ ಪುರುಸೊತ್ತಾದರೂ ಅವ್ರಿಗೆ ಎಲ್ಲಿದೆ?

ಗುಳಿಗೆ ಸಿದ್ದ: ಯಾರಿಗೂ ಬಗ್ಗೊಲ್ಲಾ , ಜಗ್ಗೋಲ್ಲ,ಯಾರ ಒತ್ತಡಕ್ಕೂ ಮಯೋಲ್ಲ ಅಂತ ಹೇಳಿದ್ರಿ.ಈಗ ನೋಡಿದ್ರೆ ಬಳ್ಳಾರಿಯವರು ನಿಮಗೆ ಬಳೆ,ಸೀರೆ,ಅರಸಿನ,ಕುಂಕುಮ ಎಲ್ಲಾ ಕಳಿಸಿದಾರಂತೆ?

ಯಡಿಯೂರಿ: ನನಗ್ಯಾಕ್ರೀ ಕಳಿಸ್ತಾರೆ? ಸುಶ್ !ಮಾ ಗೆ ಕಳಿಸಿದ್ದು ಅಡ್ರೆಸ್ ತಪ್ಪಾಗಿ ನನಗೆ ಬಂದುಬಿಟ್ಟಿದೆ.

ಪ್ರತಿಧ್ವನಿ (ಕುಹಕ ನಗೆ ಬೀರುತ್ತಾ) : ಮುಖ್ಯಮಂತ್ರಿ ಚಂದ್ರು ರಾಜ್ಯೋತ್ಸವ  ಆಹ್ವಾನ ಪತ್ರಿಕೆಯಲ್ಲಿ ನಿಮ್ಮ ಹೆಸರಿರಬೇಕಾದ ಜಾಗದಲ್ಲಿ "ಬೂಸಿ ಯಡಿಯೂರಪ್ಪ" ಅಂತ ಹಾಕಿದ್ಯಾಕೆ ಸಾರ್?

ಯಡಿಯೂರಿ: ನಾನೆಲ್ರೀ ಬೂಸಿ ಬಿಡ್ತಿದೀನಿ? ಅವ್ನ್ಯಾರ್ರೀ ಮುಖ್ಯಮಂತ್ರೀ? ಈ ನಾಡಿಗೆ ನಾನೇ ಪರ್ಮನೆಂಟ್ ಮುಖ್ಯಮಂತ್ರಿ.ಮಂಕಯ್ಯ,ಬಾಟಲಿ ಅರುಣ್,ನಾಥ ಸಿಂಗ್ ಯಾರನ್ನು ಬೇಕಾದರೂ ಕೇಳಿ.ನಾನೇ ಮುಖ್ಯಮಂತ್ರಿ (ಎನ್ನುತ್ತಾ ನಗೆ ತಂದುಕೊಂಡು "ನಾನೇ ರಾಜಕುಮಾರ,ಕನ್ನಡ ನಾಡಿನ ಪ್ರೀತಿಯ ಕುವರ ಎಂದು ಹಾಡುತ್ತಾ ಪತ್ರಿಕಾಗೊಷ್ಟಿಯಲ್ಲಿರುವುದು ನೆನಪಾಗಿ..)ಅವ್ನು ಯಾರೇ ಇರ್ಲಿ,ಜಗದೀಶ ಅಲ್ಲ ಧರಣಿಶ ಅಥವಾ ಗಣಿ ಈಶ  ಬಂದರೂ ನಾನು ಯಡಿಯೂರು,ಹೆಡೆ ಎತ್ತಿದ ಅಂದ್ರೆ ಮಗ ಲಪಕ್. (ಚಿತ್ರ ನಟ ಉದಯಕುಮಾರ ಶೆಯ್ಲಿಯಲ್ಲಿ ಗಹಗಹಿಸಿ ನಗುತ್ತಾರೆ.ಅವರು ಇತ್ತೀಚಿನ ಚಿತ್ರಗಳನ್ನು ನೋಡದ ಕಾರಣ ಹಳೇ ಶಯ್ಲಿಯಲ್ಲೇ ನುಗ್ಗುತ್ತಾರೆ.ಆ ಹೊತ್ತಿಗೆ ಅಲ್ಲಿಗೆ ಆಕಸ್ಮಿಕವಾಗಿ ಬಂದ ಮುಖ್ಯ ಮಂತ್ರಿ ಚಂದ್ರುವನ್ನು ದುರುಗುಟ್ಟಿ ನೋಡುತ್ತಾ) ಯಾಕ್ರೀ ನೀವೂ ಆ ಬಡ್ಡೀ ಮಕ್ಳ ಜತೆ ಸೇರಿಕೊಂಡು ನನ್ನನ್ನೇ ಬೂಸಿ ಯಡಿಯೂರಪ್ಪ ಅಂತ ಕರಿತಿದೀರಾ? ಇನ್ನು ನಿಮ್ಮನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ್ಯರಾಗಿ ಮುಂದುವರಿಸೋದು ಸಾಧ್ಯವೇ ಇಲ್ಲ.ಹಾಗೊಂದು
 ವೇಳೆಮುಂದುವರಿಸಬೇಕಾದ್ರೂ ನೀವು ಆ ಬಡ್ಡೀ ಮಕ್ಕಳ ಜತೆ ಇಲ್ಲ ಅಂತ ಪ್ರೂವ್  ಮಾಡಬೇಕು.ನಿಮ್ ಹೆಸರಿನಿಂದ ಮುಖ್ಯಮಂತ್ರಿ ಅನ್ನೋದನ್ನು ತೆಗೆದು ಹಾಕಬೇಕು.

ಮು.ಮಂ.ಚಂ.: ಯಾಕ್ ಯಡಿಯೂರಪ್ಪನವ್ರೆ ನನ್ನ ಮೇಲೂ ಅನುಮಾನಾನಾ? ನಾನು ಎಲ್ಲವನ್ನೂ ಕನ್ನಡದಲ್ಲೇ ಬರೆಯಬೇಕೆಂದು ನಿಮ್ಮ ಇನಿಶಿಯಲ್ಲನ್ನೂ ಕನ್ನಡದಲ್ಲೇ ಹಾಕಿದೀನಿ.ಬೂ ಅಂದ್ರೆ ಬೂಕನಕೆರೆ,ಸಿ ಅಂದ್ರೆ ಸಿದ್ದಲಿಂಗಪ್ಪ ಅಷ್ಟೇ.ಆದರೂ
 ಇವತ್ತಿನ ಪರಿಸ್ಥಿತಿಗೆ ಈ ಹೆಸರೇ  ನಿಮಗೆ ಚೆನ್ನಾಗಿ ಒಗ್ಗುತ್ತೆ.ಹ ಹ ಹ .
  ಹರೋಹರ (ಬೆಣ್ಣೆ ಹಚ್ಚುವ ದನಿಯಲ್ಲಿ) :ಚಂದ್ರುಗಳೇ,ನೀವು ಫ್ರೆಶ್ ಮೀಟ್ಗೆ ಬಂದಿದ್ದು ಒಳ್ಳೇದೇ ಆಯ್ತು.ಇಲ್ಲಾ ಅಂದಿದ್ರೆ ಅಣ್ಣಾವ್ರು ತಪ್ಪು ತಿಳ್ಕೊಳ್ತಿದ್ರು.

ಸಿಂಗಾರಿ: ಸರ್ ನೀವು ಮೊನ್ನೆ ಬಿಕ್ಕಿ ಬಿಕ್ಕಿ ಅತ್ರಲ್ಲಾ ಅಬ್ಬಾಯಿ ನಾಯ್ಡು ಇದ್ದಿದ್ರೆ ತಂದೆಯ ಮಡಿಲು ಅಂತಾ ಫಿಲಂ ತೆಗೀತಿದ್ರು ಅಲ್ವಾ ಸರ್?

ಯಡಿಯೂರಿ: ನೋಡಿ ನಾಯ್ಡು ಗೀಯ್ದು ಅಂತವರ ಹೆಸರೆತ್ಬೇಡಿ.ನಂಗೆ ಈ ಹೆಸರುಗಳೆಂದರೆ ಅಲರ್ಜಿ.

ಸಿಂಗಾರಿ: ಸರ್, ಶಾರ್ಟ್ ಅಂಡ್ ಸ್ವೀಟ್ ಆಗಿ ಮುಖ್ಯಮಂತ್ರಿ ಚಂದ್ರು ಶಯ್ಲಿಯಲ್ಲಿ ಕೇಳೋದಾದರೆ ನಿಮ್ಮ "ಶೋಕ" ಪರಿಸ್ಥಿತಿಗೆ ಕಾರಣವಾದರೂ ಏನು?

ಯಡಿಯೂರಿ: ಶೋಕ ಎಲ್ಲೀರಿ ? ಆ ಕ್ಷಣಕ್ಕೆ ದುಃಖ ಆಯ್ತು ಅತ್ತೆ .

ಸಿಂಗಾರಿ: ಸರ್, ಶೋಕ ಅಂದ್ರೆ  ಶೋಭಾ ಕರಂದ್ಲಾಜೆ.ನಾನು ಕೇಳಿದ್ದು ಅವರ  ಪರಿಸ್ಥಿತಿ.

ಯಡಿಯೂರಿ: ನೋಡಿ ಇದೆಲ್ಲಾ ಬರ್ಕೊಬೇಡಿ. ಆಪ್ ದಿ ರೆಕಾರ್ಡ್ ಹೇಳ್ತೀನಿ.(ಪಿಸುಗುಟ್ಟುವ ದನಿಯಲ್ಲಿ) ಆ ಕರುಣಾಕರ ಇದಾನಲ್ಲಾ ಹೆಸರು ಹಾಗೆ ಇಟ್ಕೊಂಡಿದಾನೆ ಅಷ್ಟೇ. ಒಂದಿಷ್ಟೂ ಕರುಣೆ ಇಲ್ಲದ ಮನುಷ್ಯ ಅವನು.ತಮ್ಮನಿಗೆ ಬುದ್ಧಿ ಹೇಳುವ ಬದಲು ಉರಿಯುವ ಬೆಂಕಿಗೆ ತುಪ್ಪ ಹಾಕ್ತಾನೆ.ನಾಟ್ಕ ಇನ್ನೂ ಮುಗ್ದಿಲ್ಲ ಅಂತಾನೆ.ಈಗಷ್ಟೇ ಶುರುವಾಗಿದೆ ಅಂತಾನೆ.ಅವ್ನು ಅವ್ನ ತಮ್ಮ ಎಲ್ಲ ಸೇರ್ಕೊಂಡು ಡೆಲ್ಲಿಯಲ್ಲಿ ಏನ್ ಮಾಡಿದಾರೆ ಗೊತ್ತಾ? ಶ್ರೀರಾಮುಲುವನ್ನೇ ಅಯೋಧ್ಯೆಯ ಶ್ರೀರಾಮಚಂದ್ರ ಅಂತ ಎಲ್ಲ ಲೀಡರ್ಗಳಿಗೆ ನಂಬಿಸಿದ್ದಾರೆ.ಅದಕಾಗಿ
  ಅವರೆಲ್ಲ ಈತನೇ ದೇವ್ರು ಅಂತ ಅವರು ಹೇಳಿದಕ್ಕೆಲ್ಲಾ ಒಪ್ಪಿಗೆ ಕೊಡ್ತಾ ಇದಾರೆ.

ಬಂಗಾರಿ;ಲೇಟೆಸ್ಟ್ ನ್ಯೂಸ್ ಪ್ರಕಾರ ಮುಖ್ಯಮಂತ್ರೀನ ಬದಲಿಸ್ತಾರೆ ಅಂತಾರಲ್ಲ? ನೀವುಮಾಡಿದ್ದೆಲ್ಲಾ
 ಸರಿ ಎನ್ನುವ ಹೌದಪ್ಪ we.yes. ಆಚಾರ್ಯ ಆದ್ರೆ ನೀವು ಒಪ್ಕೊಳ್ತೀರಂತೆ?

ಯಡಿಯೂರಿ: ಯಾರ್ರೀ ಒಪ್ಗೆ ಕೊಡೋದು?ನಾನೇ ಪರ್ಮನೆಂಟ್ ಮುಖ್ಯಮಂತ್ರಿ ಅಂತ ತೀರ್ಮಾನ ಆಗಿದೆ.ಇಲ್ಲಾ ಅಂದ್ರೆ ನಾನೂ ಕೂಡಾ ಜಾತ್ಯಾತೀತ ಭಾರತೀಯ ಜನತಾ ಪಕ್ಷ ಎಂಬ ಶರಣರ ಪಕ್ಷ ಕಟ್ಟುತ್ತೇನೆ.

ಗುಮ್ಮಣ್ಣ: ನೀವು ಶಾಸಕರನ್ನು ನಿರ್ಲಕ್ಷಿಸಿ ಅವರನ್ನು ದೂರ ಇರಿಸಿ ಆಡಳಿತ ಮಾಡುತ್ತಿದ್ದ ಕಾರಣ ಈ ಪರಿಸ್ಥಿತಿ ಬಂತು ಅಂತಾರೆ?

ಯಡಿಯೂರಿ: ಎಲ್ಲ ಸುಳ್ಳು.ನಾನು ಎಲ್ಲ ಶಾಸಕರನ್ನು,ಮಂತ್ರಿಗಳನ್ನು ಜತೆಯಲ್ಲೇ ಇರಿಸಿಕೊಂಡಿದ್ದೆ.ಪ್ರತಿಯೊಬ್ಬರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದೆ.

ಗುನ್ನಯ್ಯ: ಸರ್,ಕೊನೆ ಪ್ರಶ್ನೆ.ನಿಮ್ಮ ಸಚಿವ ಸಂಪುಟದಲ್ಲಿದ್ದ ಏಕೈಕ ಮಹಿಳಾ ಸಚಿವರನ್ನು ಕೈ ಬಿಟ್ಟಿದ್ದು ಸರಿಯೇ?

ಯಡಿಯೂರಿ: ಏನ್ರೀ ನಿಮಗೆ
 ತಲೆ ಕೆಟ್ಟಿದೆಯೇ? ಸಂಪುಟದಲ್ಲಿ ಮುಮತಾಜ್ ಕೂಡ ಇದಾಳಲ್ಲ? (ಎಲ್ಲರೂ ಬಿದ್ದು ಬಿದ್ದು ನಗುವರು. ಯಡಿಯೂರಿ ಏನೂ ಅರ್ಥವಾಗದವರಂತೆ ಆಕಾಶದತ್ತ ನೋಡುವರು.ಅಲ್ಲೂ ಕೂಡ ಬಡ್ಡಿ ಮಕ್ಕಳನ್ನು ಕಂಡಂತಾಗಿ ಬೆಚ್ಚಿ ಬೀಳುವರು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?